ರಾಯಪುರ್: ಒಂದು ಕೆಜಿ ಸೆಗಣಿಗೆ 1.50 ರೂ! ಎಷ್ಟಿದೆ ತನ್ನಿ, ನಾವ್ ತಗಳ್ತೀವಿ. ಅಲಲಾ, ಕೊಟ್ಟಿಗೆ ತುಂಬ ಹಸು, ಎಮ್ಮೆ ಸಾಕಿದವರಿಗೆ ಶುಕ್ರದೆಸೆ ಬಂತು ಬಿಡಿ. ಸದ್ಯದ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಸೆಗಣಿ ಗೊಬ್ಬರ ಮಾಡುತ್ತ ಕಾಯುವುದು ಕಷ್ಟವಿದೆ. ಹೀಗಾಗಿ ಸೆಗಣಿ ಮಾರೋದೆ ಬೆಟರು ಎಂದು ಜಾನುವಾರು ಸಾಕಿದವರು ಖುಷಿಪಡಿ.

ಇದು ಛತ್ತೀಸಗಢ್ ಸರ್ಕಾರದ ಹೊಸ ಯೋಜನೆ. ಇದೇ ಜುಲೈ 21ರಿಂದ ಸೆಗಣಿ ಖರೀದಿ ಆರಂಭವಾಗಲಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ತಿಳಿಸಿದ್ದಾರೆ. ಕಾಂಗ್ರೆಸ್ ಮುಖ್ಯಮಂತ್ರಿಯ ಈ ಯೋಜನೆಯನ್ನು ಅಲ್ಲಿನ ಆರೆಸ್ಸೆಸ್ ಘಟಕ ಸ್ವಾಗತಿಸಿದೆ.

‘ಗೋದಾನ್ ನ್ಯಾಯ್ ಯೋಜನಾ’ ಸ್ಕೀಮ್ ಅಡಿ ಈ ಸೆಗಣಿ ಖರೀದಿ ನಡೆಯಲಿದ್ದು, ಅಲ್ಲಿನ ವಿರೋಧ ಪಕ್ಷ ಬಿಜೆಪಿ ಇದನ್ನು ತಮಾಷೆ ಮಾಡಿ ಟೀಕಿಸಿದೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಆರೆಸ್ಸೆಸ್ ನ ಗ್ರಾಮ್-ಗಾಂವ್ ಘಟಕದ ಮುಖಂಡರು, ಸಿಎಂಗೆ ಪ್ರಶಂಸಾಪತ್ರ ನೀಡಿ ಯೋಜನೆಯನ್ನು ಶ್ಲಾಘಿಸುವ ಮೂಲಕ ಬಿಜೆಪಿಗೆ ಇರಿಸುಮುರುಸು ಉಂಟು ಮಾಡಿದ್ದಾರೆ.


ಜಾಹೀರಾತು


‘ಸೆಗಣಿಯನ್ನು ಕೆಜಿಗೆ 5 ರೂ. ದರದಲ್ಲಿ ಖರೀದಿಸಿ, ಗೋಮೂತ್ರವನ್ನೂ ಖರೀದಿಸಿ’ ಎಂದು ಗ್ರಾಮ್-ಗಾಂವ್ ಸಿಎಂಗೆ ಮನವಿ ಮಾಡಿದೆ.

ಇಲ್ಲಿ ಗೋ ಸೆಗಣಿ ಎಂದು ಮಾತ್ರ ಉಲ್ಲೇಖವಾಗಿದೆ. ಎಮ್ಮೆ ಸೆಗಣಿ ತಗೋತಾರಾ? ಎನ್ನುವುದು ಪ್ರಶ್ನೆಯಾಗಿದೆ.

ಇದನ್ನೂ ಓದಿ – ಪಿಯುಸಿ ಫಲಿತಾಂಶ ದಿನಾಂಕ ತಿಳಿಸಿದ ಸಚಿವ ಸುರೇಶ್ ಕುಮಾರ್

Leave a Reply

Your email address will not be published. Required fields are marked *

You May Also Like

ರಾಯಚೂರ ಜಿಲ್ಲೆಯಲ್ಲಿಂದು 14ಕೊರೊನಾ ಪಾಸಿಟಿವ್!

ರಾಯಚೂರ: ಜಿಲ್ಲೆಯಲ್ಲಿಂದು 14 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 457ಕ್ಕೆ…

ಕ್ವಾರಂಟೈನ್ ನಲ್ಲಿಯೇ ಯುವತಿಯ ಅತ್ಯಾಚಾರ..!

ಕ್ಯಾರೆಂಟೈನ್ ನಲ್ಲಿಯೇ ಇಬ್ಬರು ವಲಸೆ ಕಾರ್ಮಿಕರು ಸೇರಿದಂತೆ 6 ಪುರುಷರು 18 ವರ್ಷದ ಯುವತಿಯೋರ್ವಳನ್ನು ಸಾಮೂಹಿಕ ಅತ್ಯಾಚಾರ ಮಾಡಿದ ಘಟನೆ ನಡೆದಿದೆ

ನೀಟ್ ಫಲಿತಾಂಶದ ಯಡವಟ್ಟು, ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ!

ನವದೆಹಲಿ : ನೀಟ್ ನ ಯಡವಟ್ಟಿನಿಂದಾಗಿ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ಹಳ್ಳಿ ಹಕ್ಕಿಯನ್ನು ತಬ್ಬಲಿ ಮಾಡಿತೆ ಬಿಜೆಪಿ..?

ಬೆಂಗಳೂರು: ಮೇಲ್ಮನೆಗೆ ನಡೆಯುವ ಚುನಾವಣೆಗೆ ಬಿಜೆಪಿ ತಡರಾತ್ರಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಇಂದು ನಾಲ್ವರು…