ಕಳೆದ 3 ವರ್ಷದಿಂದ ತನ್ನ ವಿದ್ಯಾಭ್ಯಾಸದ ಖರ್ಚಿಗೆ ಕಾರ್ ತೊಳೆಯುವ ಕೆಲಸ ಮಾಡುತ್ತಿರುವ ಈ ಸ್ಲಂ ಹುಡುಗ ಸಿಬಿಎಸ್ಸಿಯಲ್ಲಿ ಶೇ. 91.7 ಸ್ಕೋರ್ ಮಾಡಿ ಛಲ ಸಾಧಿಸಿದ್ದಾನೆ.

ನವದೆಹಲಿ: ಅದು ಸ್ಲಮ್ಮೊಂದರಲ್ಲಿನ ಮನೆ. ಹೆಸರಿಗಷ್ಟೇ ಮನೆ. ಇರುವುದೇ ಎರಡು ಕೋಣೆ ಮಾತ್ರ. ಇದರಲ್ಲಿ ಒಂಭತ್ತು ಜನರ ಕುಟುಂಬ ವಾಸಿಸುತ್ತಿದೆ. ಮನೆಯ ಹಿರಿಯನಿಗೆ ಹೃದಯ ಕಾಯಿಲೆ. ಉಳಿದ ಸಹೋದರರಿಗೆ ನಿಶ್ಚಿತ ಉದ್ಯೋಗವಿಲ್ಲ. ಅಲ್ಲಿ ಹಸಿವು ಖಾಯಂ ಅತಿಥಿಯಾಗಿರುವಾಗ ವಿದ್ಯಾಭ್ಯಾಸದ ಖರ್ಚು ನಿಭಾಯಿಸುವುದೇ ಅಸಾಧ್ಯ.

ಆದರೆ, ಪರಮೇಶ್ವರ್ ಎಂಬ ಈ ಹುಡುಗ ಮಾತ್ರ ಓದಲೇಬೇಕೆಂಬ ಛಲ ಬಿಡಲಿಲ್ಲ. ದೆಹಲಿಯ ತಿಗ್ರಿ ಸ್ಲಮ್ಮಿನ ಪರಮೇಶ್ಬರ್ 10ನೆ ತರಗತಿಯಲ್ಲಿ ಇದ್ದಾಗ ವಿದ್ಯಾಭ್ಯಾಸದ ಖರ್ಚಿಗೆ ತಾನೇ ದಾರಿ ಕಂಡುಕೊಂಡ. ಮನೆಯಿಂದ 2-2.5 ಕಿಮೀ ದೂರದ ಬಡಾವಣೆಗಳಿಗೆ ಮುಂಜಾನೆ 4ಕ್ಕೆ ಹೋಗಿ ಕಾರ್ ತೊಳೆಯುವ ಕೆಲಸ ಮಾಡತೊಡಗಿದ. ಎರಡ್ಮೂರು ತಾಸು ಕೆಲಸ ಮಾಡಿ, 10-15 ಕಾರ್ ತೊಳೆಯುತ್ತಿದ್ದ. ತಿಂಗಳಿಗೆ 3 ಸಾವಿರದಷ್ಟು ಹಣ ಬರುತ್ತಿತ್ತು.

ದೆಹಲಿಯ ಚಳಿಗಾಲ ಗೊತ್ತಲ್ಲ, ಅಲ್ಲಿ ತಾಪಮಾನ ತುಂಬ ಕೆಳಕ್ಕೆ ಇಳಿಯುತ್ತದೆ. ಅಂತಹ ಸಂದರ್ಭದಲ್ಲೂ ಕಾರ್ ವಾಶ್ ಮಾಡಲೇಬೇಕಿತ್ತು. ‘ಆಗೆಲ್ಲ ತಣ್ಣೀರು ಮುಟ್ಟಿದಾಗ ಕೈ ನಡುಗತೊಡಗುತ್ತಿದ್ದವು. ಬೆರಳುಗಳು ಮರಬಿದ್ದಂಗೆ ಆಗಿ ನಿಸ್ತೇಜವಾಗುತ್ತಿದ್ದವು. ಆದರೆ ನನಗದು ಅನಿವಾರ್ಯವಾಗಿತ್ತು’ ಎಂದು ಪರಮೇಶ್ವರ್ ನೆನೆಯುತ್ತಾನೆ.

ಪರೀಕ್ಷಾ ಸಂದರ್ಭದಲ್ಲಿ ಅವರ ತಂದೆಗೆ ಹೃದಯದ ಶಸ್ತ್ರಚಿಕಿತ್ಸೆಯಾಯಿತು. ಆಗ ಪರಮೇಶ್ವರ್ ಆಸ್ಪತ್ರೆಯಲ್ಲೇ ಇದ್ದು ಓದಿದ. ಹಿಂದಿ ವಿಷಯ ಅಲ್ಲಿಯೇ ಓದಿ ಪರೀಕ್ಷೆ ಬರೆದ.

ಆಶಾ ಸೊಸೈಟಿ ಎಂಬ ಎನ್.ಜಿ.ಒ ಪುಸ್ತಕಗಳು, ಹಳೆಯ ಪ್ರಶ್ನೆಪತ್ರಿಕೆ-ಮಾದರಿ ಉತ್ತರಗಳ ಕೈಪಿಡಿಗಳನ್ನು ನೀಡಿ ಪ್ರೋತ್ಸಾಹಿಸಿತು.

ಪರಮೇಶ್ವರ್ ಸಿಬಿಎಸ್ಸಿ ಪರೀಕ್ಷೆಯಲ್ಲಿ ಶೇ. 91.7 ಅಂಕ ಗಳಿಸಿ ದೊಡ್ಡ ಯಶಸ್ಸು ಪಡೆದಿದ್ದಾನೆ. ಮುಂದೆ ಶಿಕ್ಷಕನಾಗುವ ಗುರಿ ಹೊಂದಿರುವ ಈತ, ತನ್ನಂತಹ ಅಸಹಾಯಕ ಮಕ್ಕಳ ನೆರವಿಗೆ ನಿಲ್ಲುವ ಉದ್ದೇಶ ಇಟ್ಟುಕೊಂಡಿದ್ದಾನೆ.

ಅವಕಾಶ ವಂಚಿತ ಈ ಸ್ಲಂ ಹುಡುಗ ತಾನೇ ಅವಕಾಶ ಸೃಷ್ಟಿಸಿಕೊಂಡು ಯಶಸ್ಸು ಪಡೆಯುವ ಮೂಲಕ ಮಾದರಿಯಾಗಿದ್ದಾನೆ.

Leave a Reply

Your email address will not be published. Required fields are marked *

You May Also Like

ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಕನ್ನಡಿಗನ್ನು ರಕ್ಷಿಸಿದ ನಟ!

ಕೊರೊನಾ ಲಾಕ್ ಡೌನ್ ನಿಂದಾಗಿ ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಕರ್ನಾಟಕದ ನೂರಾರು ವಲಸೆ ಕಾರ್ಮಿಕರಿಗೆ ಅವರ ಊರುಗಳಿಗೆ ತಲುಪಿಸಲು ಬಾಲಿವುಡ್ ನಟ ಸೋನು ಸೂದ್ ಮುಖ್ಯ ಪಾತ್ರ ವಹಿಸಿದ್ದರು.

ಸಾಮಾಜಿಕ ಜಾಲತಾಣಗಳಿಗೆ ಖಡಕ್ ಎಚ್ಚರಿಕೆ ನೀಡಿದ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್

ಸಾಮಾಜಿಕ ಜಾಲತಾಣ ದೈತ್ಯ ಟ್ವಿಟರ್ ಮತ್ತು ಫೇಸ್ ಬುಕ್, ವಾಟ್ಸ್ ಆಯಪ್ ಮುಂತಾದ ಸಾಮಾಜಿಕ ಜಾಲತಾಣಗಳು ನೆಲದ ನಿಯಮವನ್ನು ಪಾಲಿಸಬೇಕು ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಗುರುವಾರ ತಿಳಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ದ್ವೇಷ ಹರಡುವುದನ್ನು ಸರ್ಕಾರ ಸಹಿಸುವುದಿಲ್ಲ ಎಂದು ಹೇಳಿದರು.

ಹಲವು ವರ್ಷಗಳಲ್ಲಿ 139 ಜನರಿಂದ ಅತ್ಯಾಚಾರಕ್ಕೊಳಗಾದ ಮಹಿಳೆ

ಮಹಿಳೆಯೊಬ್ಬರಿಗೆ ಕೆಲವು ವರ್ಷಗಳಲ್ಲಿ 139 ಜನರು ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ನಡೆದಿದ್ದು, 25 ವರ್ಷದ ಮಹಿಳೆ ಈ ಕುರಿತು ದೂರು ದಾಖಲಿಸಿದ್ದಾರೆ. ಈ ಸಂತ್ರಸ್ಥ ಮಹಿಳೆಗೆ 2010ರಲ್ಲಿ ವಿವಾಹವಾಗಿತ್ತು. ಆದರೆ, ಈ ಮಹಿಳೆ ಒಂದೇ ವರ್ಷದಲ್ಲಿ ಪತಿಯಿಂದ ವಿಚ್ಛೇದನ ಪಡೆದಿದ್ದರು. ಹೀಗಾಗಿ ಮಾಜಿ ಪತಿಯ ಕೆಲವು ಕುಟುಂಬ ಸದಸ್ಯರು ನನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಪ್ಲಾಸ್ಮಾ ಥೆರೆಪಿ ಭರವಸೆ ಹುಸಿಯಾಯಿತೇ?

ಕೊರೊನಾ ಚಿಕಿತ್ಸೆಗೆ ಪ್ಲಾಸ್ಲಾ ಥೆರೆಪಿ ರಾಮಬಾಣ ಎಂದೇ ಎಲ್ಲರೂ ಹೇಳುತ್ತಿದ್ದರು. ಆದರೆ, ಸದ್ಯ ಇದು ಹುಸಿಯಾಗಿದೆ ಎನ್ನಲಾಗುತ್ತಿದೆ.