ದಾವಣಗೇರಿ:ಮುಂದಿನ ತಿಂಗಳು ನೆಡೆಯಬೇಕಿದ್ದ 283ನೇ ಸಂತ ಸೇವಾಲಾಲ್ ಜಯಂತೋತ್ಸವ ಧಾರ್ಮಿಕ ಕಾರ್ಯಕ್ರಮವನ್ನು ಕೊರೋನಾ ಮೂರನೇ ಅಲೆಯ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿದೆ.

ಇಂದು ದಾವಣಗೇರಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಪಿ ರಾಜೀವ್, ಮಾಜಿ ಸಚಿವರು ಮಹಾ ಮಠ ರಾಜ್ಯ ಸಮಿತಿ ಅಧ್ಯಕ್ಷರಾದ ಶ್ರೀ ರುದ್ರಪ್ಪ ಲಮಾಣಿ, ಹೊನ್ನಾಳಿ ಕ್ಷೇತ್ರದ ಶಾಸಕರಾದ ಎಂ ಪಿ ರೇಣುಕಾ ಚಾರ್ಯ, ಮಾಜಿ ಶಾಸಕರಾದ ಶ್ರೀ ಬಸವರಾಜ್ ನಾಯ್ಕ, ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಶ್ರೀ ಮಾರುತಿ ನಾಯ್ಕ ಹಾಗೂ ಮಾನ್ಯ ಜಿಲ್ಲಾಧಿಕಾರಿ, ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಕೆಲವು ಸಮಾಜದ ಮುಖಂಡರುಗಳ ಉಪಸ್ಥಿತಿಯಲ್ಲಿ ನೆಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಪ್ರತಿ ವರ್ಷ ಸೇವಾಲಾಲ ಜಯಂತಿಯನ್ನು ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸುರಗೊಂಡನಕೊಪ್ಪದಲ್ಲಿ ಲಕ್ಷಾಂತರ ಭಕ್ತರು ಸೇರಿ ಆಚರಿಸಲಾಗುತ್ತದೆ. ಬಂಜಾರ ಜನಾಂಗದ ಆರಾಧ್ಯದೈವ ಶ್ರೀ ಸಂತ ಸೇವಾಲಾಲ ಜಯಂತಿಯನ್ನು ಬಂಜಾರ ಜನಾಂಗವಲ್ಲದೆ ಎಲ್ಲ ಜನಾಂಗದವರು ಸೇರಿ ಆಚರಣೆ ಮಾಡುತ್ತಾರೆ.

ಪ್ರತಿ ವರ್ಷ ದೇಶ , ವಿದೇಶದಿಂದ ಭಕ್ತರು ಜಯಂತಿಯಂದು ಬಂದು ಸೇವಾಲಾಲರ ಆರ್ಶಿವಾದ ಪಡೆದು ಪುನಿತರಾಗುತ್ತಾರೆ. ಎಲ್ಲ ತಾಂಡಾಗಳ ಜನರು ಭಕ್ತಿ ಭಾವದಿಂದ ಜಯಂತಿಯನ್ನು ಆಚರಣೆ ಮಾಡುತ್ತಾರೆ. ಪ್ರತಿ ವರ್ಷ ಲಕ್ಷಾಂತರ ಮಾಲಾಧಾರಿಗಳು ತಿಂಗಗಳುಗಂಟಲೇ ವೃತವನ್ನು ಮಾಡಿ ಸೂರಗೊಂಡನ ಕೊಪ್ಪಕ್ಕೆ ಬಂದು ಮಾಲೆಯನ್ನು ತಗೆದು ಸೇವಾಲಾಲ ಕೃಪಾರ್ಶಿವಾದ ಪಡೆದು ಕೊಳ್ಳುತ್ತಾರೆ. ಆದರೆ ಈ ಬಾರಿ ಸರ್ಕಾರದ ನಿರ್ಧಾರದಿಂದ ಭಕ್ತರಿಗಂತೂ ನಿರಾಶೆಯಾಗಿದೆ. ಕೊರೊನಾ ಮಹಾಮಾರಿಯನ್ನು ತಡೆಗಟ್ಟಲು ಇಂತಹ ನಿರ್ಧಾರ ತೆಗೆದುಕೊಳ್ಳಲೇ ಬೇಕು.

ಭಕ್ತರ ಆಕ್ರೋಶ: ಜಯಂತಿಯನ್ನು ರದ್ದು ಪಡಿಸಿದ್ದನ್ನು ಕೆಲವು ಭಕ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕಪಡಿಸುತ್ತಿದ್ದಾರೆ. ಸರ್ಕಾರ ಇಷ್ಟು ಬೇಗ ಇಂತಹ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಇನ್ನೂ ಒಂದು ತಿಂಗಳ ಕಾಲವಿದೆ ಕೊರೊನಾ ಅಲೇ ಕಡಿಮೆಯಾದರೆ ಜಯಂತಿಯನ್ನು ಆಚರಣೆ ಮಾಡಬೇಕು ಎನ್ನುವುದು ಬಹುತೇಕ ಭಕ್ತರ ಒತ್ತಾಯವಾಗಿದೆ.

ಜಯಂತಿಯನ್ನು ರದ್ದು ಪಡಿಸಲಾಗಿದೆ . ಸರ್ಕಾರದಿಂದ ಸರಳ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ.ಮಾಲಾಧಾರಿಗಳು ಸೂರಗೊಂಡನಕೊಪ್ಪಕ್ಕೆ ಬರದೆ ತಾಂಡಾದಲ್ಲಿಯೇ ಉಳಿದು ಆಚರಿಸಲು ಮನವಿ. ಎಲ್ಲರೂ ಸರಳ ರೀತಿಯಲ್ಲಿ ಜಯಂತಿಯನ್ನು ಆಚರಿಸಬೇಕು ಜಯಂತಿ ಆಚರಣೆ ಸಮಯದಲ್ಲಿ ಕೊರೊನಾ ನಿಯಮ ಪಾಲಿಸಲು ಮನವಿ

Leave a Reply

Your email address will not be published. Required fields are marked *

You May Also Like

ವಿಕೆಂಡ್ ಮೀಟಿಂಗ್ ನಲ್ಲಿ ಮೂರನೇ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸುತ್ತಾ ಬಿಜೆಪಿ?

ಬಿಜೆಪಿ ಕೋರ್ ಕಮೀಟಿಯ ಮೀಟಿಂಗ್ ಗೆ ಇದೀಗ ಹೆಚ್ಚು ಮಹತ್ವ ಬಂದಿದ್ದು ವಿಕೇಂಡ್ ಮೀಟಿಂಗ್ ಯಾವ ನಿರ್ಧಾರಕ್ಕೆ ಸಾಕ್ಷಿಯಾಗಲಿದೆ ಎನ್ನುವುದು ಆಕಾಂಕ್ಷಿಗಳಲ್ಲಿ ಆಸಕ್ತಿ ಮೂಡಿಸಿದೆ.

ನಿಡಗುಂದಿಯಲ್ಲಿ ಬಿ.ಇಡಿ.ಪ್ರಶಿಕ್ಷಣಾಥಿ೯ಗಳಿಗೆ ಸ್ವಾಗತ- ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ ಶಿಕ್ಷಣದಿಂದ ಉತ್ತಮ ವ್ಯಕ್ತಿತ್ವ ರೂಪ

ನಿಡಗುಂದಿ: ಶಿಕ್ಷಣದ ಉದ್ದೇಶ ಒಳ್ಳೇಯ ಸಂಸ್ಕಾರಯುತ ವ್ಯಕ್ತಿತ್ವ ರೂಪಿಸುವುದು. ತರಗತಿ ಪಠ್ಯಕ್ರಮವನ್ನು ಅಭ್ಯಸಿಸುವದರ ಜೊತೆಗೆ ಸಾಮಾಜಿಕ…

ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಯುವವರೆಗೂ ಲಾಕ್ ಡೌನ್ ಇಲ್ಲ!

ಬೆಂಗಳೂರು : ಲಾಕ್ ಡೌನ್ ತೆರವುಗೊಂಡ ನಂತರ ರಾಜ್ಯ ಸೇರಿದಂತೆ ದೇಶದಲ್ಲಿ ಕೊರೊನಾ ಸ್ಪೋಟಗೊಂಡಿದೆ. ಹೀಗಾಗಿ…